ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ...

Scan the qr code to link to this page

ಹದೀಸ್
ವಿವರಣೆ
ಅನುವಾದಗಳನ್ನು ತೋರಿಸಿ
ಹದೀಸಿನ ಪ್ರಯೋಜನಗಳು
ವರ್ಗಗಳು
ಇನ್ನಷ್ಟು
ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸುತ್ತಾರೋ ಅವರ ಪಾಪಗಳು ಅವರ ದೇಹದಿಂದ ಹೊರಟುಹೋಗುತ್ತವೆ; ಎಲ್ಲಿಯವರೆಗೆಂದರೆ, ಅವರ ಉಗುರುಗಳ ಅಡಿಭಾಗದಿಂದಲೂ ಸಹ."
Sahih/Authentic. - Muslim

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ವುದೂವಿನ ಐಚ್ಛಿಕ ಕಾರ್ಯಗಳು ಮತ್ತು ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸುತ್ತಾ ಯಾರು ವುದೂ ನಿರ್ವಹಿಸುತ್ತಾರೋ, ಅದು ಅವರ ಪಾಪಗಳು ಪರಿಹಾರವಾಗಲು ಮತ್ತು ದೋಷಗಳು ನಿವಾರಣೆಯಾಗಲು ಕಾರಣವಾಗುತ್ತದೆ. ಎಲ್ಲಿಯವರೆಗೆಂದರೆ, ಅವರ ಕೈಗಳ ಮತ್ತು ಪಾದಗಳ ಉಗುರುಗಳ ಅಡಿಭಾಗದಿಂದಲೂ ಪಾಪಗಳು ನಿವಾರಣೆಯಾಗುತ್ತವೆ.

ಹದೀಸಿನ ಪ್ರಯೋಜನಗಳು

  1. ವುದೂ, ಅದರ ಐಚ್ಛಿಕ ಕಾರ್ಯಗಳು ಮತ್ತು ಅದರ ಶಿಷ್ಟಾಚಾರಗಳನ್ನು ಸರಿಯಾಗಿ ಕಲಿತು, ಅದರಂತೆ ವುದೂ ನಿರ್ವಹಿಸಲು ಕಾಳಜಿ ತೋರಬೇಕೆಂದು ಈ ಹದೀಸ್ ಒತ್ತಾಯಿಸುತ್ತದೆ.
  2. ವುದೂವಿನ ಶ್ರೇಷ್ಠತೆಯನ್ನು ಮತ್ತು ಅದು ಸಣ್ಣ ಪಾಪಗಳಿಗೆ ಪರಿಹಾರವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಮಹಾಪಾಪಗಳಿಗೆ ಪಶ್ಚಾತ್ತಾಪ (ತೌಬ) ಕಡ್ಡಾಯವಾಗಿದೆ.
  3. ಪಾಪಗಳು ದೇಹದಿಂದ ನಿವಾರಣೆಯಾಗಬೇಕಾದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಲಿಸಿಕೊಟ್ಟ ರೀತಿಯಲ್ಲಿ ಪೂರ್ಣವಾಗಿ ಯಾವುದೇ ಲೋಪಗಳನ್ನು ಮಾಡದೆ ವುದೂ ನಿರ್ವಹಿಸಬೇಕಾಗಿದೆ.
  4. ಈ ಹದೀಸಿನಲ್ಲಿ ಹೇಳಲಾದಂತೆ ಸಣ್ಣ ಪಾಪಗಳು ಪರಿಹಾರವಾಗಬೇಕಾದರೆ, ಮಹಾಪಾಪಗಳಿಂದ ದೂರವಿರುವುದು ಮತ್ತು ಪಶ್ಚಾತ್ತಾಪ ಪಡುವುದು ಕಡ್ಡಾಯವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನಿಮಗೆ ವಿರೋಧಿಸಲಾದ ಮಹಾಪಾಪಗಳಿಂದ ನೀವು ದೂರವಿದ್ದರೆ, ನಿಮ್ಮ ಸಣ್ಣ ಪಾಪಗಳನ್ನು ನಾವು ಅಳಿಸಿಬಿಡುವೆವು." [ನಿಸಾಅ್‌ 31]

ವರ್ಗಗಳು

ಯಶಸ್ವಿಯಾಗಿ ರವಾನಿಸಲಾಗಿದೆ!